![]() |
| ಛಾಯೆ:ಹರಿಪ್ರಸಾದ್ |
"ನಿಮ್ಮ ಬಗ್ಗೆ ಯಾವುದೇ ಟೀಕೆಗಳಿಲ್ಲದಿದ್ದರೆ ನೀವು ಸರಿದಾರಿಯಲ್ಲಿ ಸಾಗುತ್ತಿಲ್ಲವೆಂದರ್ಥ"
ಈ ಮಾತನ್ನು ಹೇಳಿದವರು ಸ್ವಾಮಿ ವಿವೇಕಾನಂದರು.ಅವರು ಹೇಳಿದ ಮಾತು ನೂರಕ್ಕೆ ನೂರು ಸತ್ಯ ಎಂದು ನನಗೆ ಹಲವು ಬಾರಿ ಅನಿಸಿದ್ದುಂಟು.
ಹಲವು ಬಾರಿ ಟೀಕೆಗಳನ್ನನುಭವಿಸಿದಾಗ ದುಃಖವಾಗುವುದು ಅಥವಾ ಮನಸ್ಸಿಗೆ ನೋವಾಗುವುದು ಒಬ್ಬ ಮನುಷ್ಯನ ಸಹಜ ಗುಣ.
ಒಬ್ಬ ಸರಿದಾರಿಯಲ್ಲಿ ಸಾಗುತ್ತಿಲ್ಲದಿದ್ದರೆ ಅವನ ತಪ್ಪುಗಳನ್ನು ತಿದ್ದುವುದು ಅಥವಾ ಸರಿಪಡಿಸುವುದು ಸುಲಭವಲ್ಲದ್ದರಿಂದ ಹಾಗು ನಾವು ತಪ್ಪುದಾರಿಯನ್ನು ತುಳಿಯುವುದನ್ನು ಕಂಡು ಖುಷಿ ಪಟ್ಟು ಟೀಕೆ ಮಾಡದವರೇ ಹೆಚ್ಚು.
ಇನ್ನು ನೀವು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದರೆ ಸಾಕು ನಿಮ್ಮ ಬಗೆಗಿನ ಟೀಕೆಗಳ ಪಟ್ಟಿಯೇ ಬೆಳೆಯುತ್ತದೆ.
ಇನ್ನು ನನ್ನ ಅನುಭವವನ್ನು ಹೇಳಬೇಕಾದರೆ ನಾನು ಅನುಭವಿಸಿದ ಟೀಕೆಗಳಿಗೆ ಲೆಕ್ಕವಿಲ್ಲ.
ನನ್ನ ಬಗೆಗಿನ ಟೀಕೆಗಳನ್ನೆಲ್ಲಾ ನಾನು ತಲೆಗೆ ಹಚ್ಚಿಕೊಂಡಿದ್ದರೆ ನಾನು ಹುಚ್ಚನಾಗಿ ಬಿಡುತ್ತಿದ್ದೆನೊ ಏನೋ!
ನಾನು ಯಾವುದೇ ಛಾಯಾಚಿತ್ರವನ್ನು ತೆಗೆದಾಗ,ಯಾವುದೇ ಲೇಖನಗಳನ್ನು ಬರೆದಾಗ,ತರಗತಿಯಲ್ಲಿ ಯಾವುದೇ ಉತ್ತರ ನೀಡಿದಾಗ ಇನ್ನೂ ಅನೇಕ ಸಂದರ್ಭದಲ್ಲಿ ಅನೇಕ ಟೀಕೆಗಳನ್ನನುಭವಿಸಿದವನು ನಾನು!
ಆದರೆ ಇಂದಿನವರಗೆ ಅದು ನನ್ನ ಹಿತೈಷಿಗಳು ನೀಡಿದ ಕಿವಿಮಾತೆಂದು ತಿಳಿದಿದ್ದೇನೆ.
ನಿಮಗೆ ಟೇಕೆಗಳೇ ಇಲ್ಲದಿದ್ದರೆ ನಿಮ್ಮ ತಪ್ಪಿನ ಅರಿವಾಗುವುದೆಂತು!
ಎಲ್ಲರೂ ನಿಮ್ಮನ್ನು ಹೊಗಳುತ್ತಿದ್ದರೆ ನಿಮಗೆರಡು ಕೊಂಬುಬಂದು ತಪ್ಪು ದಾರಿ ಹಿಡಿಯಲೆತ್ನಿಸುತ್ತೀರಿ!,ಹಾಗಾಗಿ ನೀವು ಟೀಕಾಕಾರರಿಗೊಂದು thanks ಹೇಳಬೇಕು,ಅವರೇ ಅಲ್ಲವೇ ನಿಮ್ಮ ತಪ್ಪುಗಳನ್ನು ತಿದ್ದಿ ಸರಿದಾರಿಯಲ್ಲಿ ಹೋಗಲು ಸಹಕರಿಸುತ್ತಿರುವುದು.
ಈ ಟೀಕೆಗಳಿದೆಯಲ್ಲಾ ಅವು ನಮ್ಮ ಬಂಧು ಮಿತ್ರರಲ್ಲೇ ಹೆಚ್ಚು!
ಯಾವುದೇ ಒಂದು ಮದುವೆ ಸಮಾರಂಭದಲ್ಲಾಗಿರಬಹುದು ಅಥವಾ ಇನ್ಯಾವುದೋ ಇತರ ಕಾರ್ಯಕ್ರಮದಲ್ಲಾಗಿರಬಹುದು,ಸಂಘಟಕರು ಕಾರ್ಯಕ್ರಮವನ್ನು ಎಷ್ಟೇ ಚಂದಗಾಣಿಸಲು ಪ್ರಯತ್ನ ಪಟ್ಟರೂ ಈ ಟೀಕಾಕಾರರೇ ಅಲ್ಲಿ ಮೇಲುಗೈ ಸಾದಿಸಿಬಿಡುತ್ತಾರೆ ನೋಡಿ!!!
ಅಡುಗೆ ಏನೂ ಸರಿಯಾಗಿರಲಿಲ್ಲ,ಮದುವೆ ಗಂಡು ಸ್ವಲ್ಪಕಪ್ಪು,"ಮದುವೆ ಮನೆಯವರಿಗೆ ಸ್ವಲ್ಪವೂ ಸತ್ಕಾರಮಾಡುವ ಸ್ವಭಾವವಿಲ್ಲ. . .ನನ್ನಬಳಿ ಮತನಾಡಲೇ ಇಲ್ಲವಲ್ಲ",ಹೀಗೆ ಟೀಕೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಇನ್ನು ನೆರೆಕರೆ ಮನೆಯವರಲ್ಲಿ ಈ ಟೀಕೆಗಳು ಇನ್ನೂ ತಮಾಷೆಯಾಗಿರುತ್ತದೆ,ಕೆಳಗಿನ ಮನೆಯಲ್ಲಿ ಪಾತ್ರೆಯ ಶಬ್ದವಾದರೆ ಅದು ನಮ್ಮ ಮೇಲಿನ ಸಿಟ್ಟಿನಿಂದ ಮಾಡಿದ ಸದ್ದು,ಇನ್ನು ನೀರು ಬರುವುದು ನಿಂತರೆ ಅದು ಪಕ್ಕದ ಮನೆಯವರು ನಿಲ್ಲಿಸಿದ್ದು,ಇತ್ಯಾದಿ ಅರ್ಥಹೀನ ಟೀಕೆಗಳು!!
ಈ ಟೀಕಾಪ್ರಹಾರ ಎನ್ನುವುದು ಈ ಮನೆಯಲ್ಲಿ ಸುಮ್ಮನೆ ಕುಳಿತಿರುವ ಹೆಂಗಸರಿಗೆ ಒಂದು ರೀತಿಯ time pass ಉದ್ಯೋಗ (ಎಲ್ಲರಿಗೂ ಈ ಮಾತು ಅನ್ವಯಿಸುವುದಿಲ್ಲ ;) ).
ವಿದ್ಯಾರ್ಥಿಗಳಾದ ನಾವಂತೂ ಶಿಕ್ಷಕರನ್ನು ಟೀಕೆ ಮಾಡುವುದರಲ್ಲಿ ಎತ್ತಿದ ಕೈ,ಸರಿಯಾಗಿ ಓದದ ನಾವು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ದೂರುವುದು ಶಿಕ್ಷಕರನ್ನು!!!
ಇನ್ನು ಯಾವುದೇ ಒಂದು ಸಂಗೀತ ಕಾರ್ಯಕ್ರಮದಲ್ಲಿ ನೀವು ಕುಳಿತರೆ ಸಂಗೀತದ ಗಂಧಗಾಳಿಯೂ ಇಲ್ಲದ ಅಯೋಗ್ಯರು ಮಾಡುವ ಸ್ವರ,ಸ್ಥಾಯಿ,ರಾಗದ ಬಗೆಗಿನ ಟೀಕೆಗಳು ಹಾಸ್ಯಾಸ್ಪದ.
ಇನ್ನು ರಾಜಕಾರಣಿಗಳ ಟೀಕೆಯನ್ನು ನೋಡಬೇಕು ತನ್ನ ಪಕ್ಷ ಭ್ರಶ್ಟತೆಯಲ್ಲಿ ಮುಳುಗಿದ್ದರೂ ಇನ್ನೊಬ್ಬನ ಬಗ್ಗೆ ಟೀಕೆಮಾಡುವವರಿಗೆಷ್ಟು ನೈತಿಕತೆಯಿದೆ???
"ಎಲ್ಲರ ಮನೆಯ ದೋಸೆ ತೂತಾದರೆ ತನ್ನ ಮನೆಯ ಕಾವಲಿಯೇ ತೂತೆಂಬುದನ್ನು ಅರಿಯಲಾರರು"ಎಂಬ ಉಕ್ತಿಯಂತಾಯಿತಲ್ಲವೇ ಈ ಮೇಲಿನವರ ಪರಿಸ್ಥಿತಿ.
ಇನ್ನು jobs,ಅಬ್ದುಲ್ ಕಲಾಂ,ಎಡಿಸನ್ ಅಷ್ಟೇ ಏಕೆ ನಮ್ಮ ಸ್ವಾಮಿ ವಿವೇಕಾನಂದರು ಟೀಕೆಯ ಬಾಣಗಳನ್ನೇ ಹೂವಿನ ಬಾಣಗಳಾಗಿಸಿ ಸಾಧಿಸಿದ ಮಹನೀಯರು.
ಇನ್ನು ಆ ಭಾಗವಂತನೇ ಹಲವು ಟೀಕೆಗಳನ್ನನುಭವಿಸುವಾಗ ಹುಲು ಮಾನವರಾದ ನಾವ್ಯಾವ ಲೆಕ್ಕ??!!!
ನಮ್ಮ ಮೇಲಿನ ಟೀಕೆಗಳಿಗೆ ಪ್ರತಿಯಾಗಿ ಮರು ಟೀಕೆಮಾಡದೆ ಅದನ್ನೇ ನಮಗೆ ನೀಡಿದ ಸಲಹೆಯೆಂದು ಬಾವಿಸಿ ಟೀಕಾಕಾರರೆದುರು ಓರ್ವ ಯಶಸ್ವಿ ವ್ಯಕ್ತಿಯಾಗಿ ಸಾಧಿಸಿ ತೋರಿಸುವುದು ಸೂಕ್ತವಲ್ಲವೇ?????

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ