|
ಚಿತ್ರ ಕೄಪೆ:ಅಂತರ್ಜಾಲ |
ರಜೆಗೆ ಮನೆಗೆ ಬರುವಾಗ ನಾನು ಮೊದಲು ಹೋಗುವುದು ಅಪ್ಪನ ಆಫೀಸಿಗೆ. . .
ಅಲ್ಲಿ ಮೊದಲು ಕಣ್ಣಾಡಿಸುವುದು ಅವರ ಪುಸ್ತಕದ ಕಬೋರ್ಡಿಗೆ. .
ಸಾಮಾನ್ಯವಾಗಿ ಉಪನ್ಯಾಸ ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ತಂದೆಯವರಿಗೆ ಅನೇಕ ಅಮೂಲ್ಯ ಪುಸ್ತಕಗಳು ಉಡುಗೋರೆಯಾಗಿ ಸಿಕ್ಕಿರುತ್ತದೆ . . .
ಈ ಬಾರಿ ಎಂದಿನಂತೆ ಬಂದು ಕಣ್ಣಾಡಿಸಿದಾಗ ಸಿಕ್ಕ ಪುಸ್ತಕ ಜೀವಾಳರ 'ಕಾಡಿನ ಸಂತ ತೇಜಸ್ವಿ'. . .
ಈ ತೇಜಸ್ವಿ ಎಂಬ ಪದವನ್ನು ನೋಡಿದ ಮೇಲೆ ತಡೆಯಲಾರದ ಕುತೂಹಲ ನನ್ನಲ್ಲಿ ಆವರಿಸಿಬಿಟ್ಟಿತು. . .
ತೇಜಸ್ವಿ ಅವರ ಕೄತಿಗಳೇ ಹಾಗೆ ನೀವು ಒಂದು ಪುಟ ಓದಿದರೆ ಸಾಕು ಕೊನೆಯ ಪುಟದವರಗೆ ಓದುವತನಕ ಪುಸ್ತಕ ಬಿಟ್ಟು ಏಳಲು ಮನಸ್ಸು ಬರುವುದಿಲ್ಲ . .
ತೇಜಸ್ವಿಯವರು ಬರೆದ ಕೄತಿಗಳಂತೂ ವೈಜ್ಞಾನಿಕ . . .
ಇನ್ನು ಅವರ ಜೀವನ ಶೈಲಿ ,ಅವರ ಸಂಭಾಷಣೆಗಳನ್ನು ಓದುವುದು ಇನ್ನೂ ಚಂದ. . .
ಅವರ ಜೀವನ ಶೈಲಿಯೇ ಅಂತದ್ದು ನೋಡಿ. . .
ಅವರೊಂದಿಗೆ ನೀವು ಒಮ್ಮೆ ಮಾತಾಡಿದ್ದರೆ ಸಾಕು ಅದನ್ನು ನೀವು ಜೀವಮಾನವಿಡೀ ಮರೆಯುವ ಹಾಗಿಲ್ಲ. . .
ಯಾವುದಾದರೂ ಮಹಾನ್ ವ್ಯಕ್ತಿಗಳೊಡನೆ ಸಮಯ ಕಳೆಯುವ ಅವಕಾಶ ನಮಗೆ ಒದಗಿ ಬಂದರೆ ಅದು ನಮ್ಮ ಭಾಗ್ಯ . .
ಅಂತಹಾ ಭಾಗ್ಯ ನನಗೊಂದು ಬಾರಿ ಒದಗಿಬಂತು. . .
ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಹೋದ ಎರಡು ಚಾರಣ ಮರೆಯಲಸಾದ್ಯ . . .
ಕಾರಣ ನಾನು ಚಾರಣ ಹೋದದ್ದು ನನ್ನ ನೆಚ್ಚಿನ ಲೇಖಕ ತೇಜಸ್ವಿಯೊಂದಿಗೆ. .
ಜೀವಾಳರ ನೇಚರ್ ಕ್ಲಬ್ ಆಯೋಜಿಸಿದ್ದ ಚಾರಣಕ್ಕೆ ತಂದೆಯೊಂದಿಗೆ ನಾನು ಹೋಗಿದ್ದೆ. . .
ಎತ್ತಿನ ಭುಜ ಮತ್ತು ಗವಿ ಗುಡ್ಡ ಕಾಡಿಗೆ ಹೋಗಿದ್ದ ಚಾರಣ ನಿಜಕ್ಕೂ ಅವಿಸ್ಮರಣೀಯ , , , ಕಾರಣ ತೇಜಸ್ವಿ. . .!
ಆ ವ್ಯಕ್ತಿ ಸರಳ ಸಜ್ಜನ ವ್ಯಕ್ತಿ . . .
ಕಾಡಿನಲ್ಲಿ ಸಂಚರಿಸುತ್ತ ಬೇಸತ್ತಿದ್ದ ನಮಗೆ ತೇಜಸ್ವಿಯವರ ಸಮಯೋಚಿತ ಹಾಸ್ಯ ನಮ್ಮ ಆಯಾಸವನ್ನು ಮರೆಯಿಸುತ್ತಿತ್ತು. . . .
ಅವರ ಸಂಭಾಷಣೆ ಹೇಗೆ ನನ್ನಲ್ಲಿ ಅಚ್ಚಳಿಯದೆ ಉಳಿದಿದೆ ಎಂದರೆ ನಾವು ಎತ್ತಿನ ಭುಜ ಚಾರಣದಿಂದ ಹಿಂದೆ ಬರುವಾಗ ಅವರು ಮರದ ಬುಡ್ಡೆಯಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾಗ ಯಾರೊ ಫೊಟೋ ಕ್ಲಿಕ್ಕಿಸಲು ಹೋದಾಗ ತೇಜಸ್ವಿ" ಈ ಫೊಟೋನ ನೋಡಿ ಯಾವನೋ ಮುದುಕ ಸತ್ತ್ ಬಿದ್ದಿದಾನೆ ಅಂತ ತಿಳ್ಕಳ್ಬೋದು ಮಾರಾಯಾ" ಎಂದಿದ್ದರು. . .
ಹೇಗೆ ಅವರ ಮಾತಿನಲ್ಲಿ ಹಾಸ್ಯ ತುಂಬಿತ್ತೋ ಹಾಗೇ ಮುಂಗೋಪಿ ಕೂಡಾ. . .
ಏನಾದರೊಂದು ಎಡವಟ್ಟು ಮಾಡಿಸಿಕೊಂಡು ಬೈಯಿಸಿಕೊಂಡವರ ಸಂಖ್ಯೆಯೇ ಹೆಚ್ಚು. . . !
ಇದೆಲ್ಲಾ ನೆನಪಾದದ್ದು ಮೊನ್ನೆ ನಾನು ಹಳೇಕೋಟೆ ರಮೇಶ್ ಅವರ ಒಂದು ಪುಸ್ತಕದಲ್ಲಿ ಇದ್ದ ಚಾರಣಕ್ಕೆ ಹೋದ ತಂಡದ ಗುಂಪು ಛಾಯಾಚಿತ್ರವನ್ನು ನೋಡಿದಾಗ. . .
ಅದರಲ್ಲಿದ್ದ ನನ್ನನ್ನು ನೋಡಿ ಅದು ನಾನೆ? ಎಂಬ ಅನುಮಾನ. . .ಅದರೊಂದಿಗೆ ಈ ಸವಿನೆನಪು :)
ಛೇ!! ನಾನು ಎಲ್ಲಿಂದ ಎಲ್ಲಿಗೆ ಹೋಗಿಬಿಟ್ಟೆ ನೋಡಿ . . .
ನಾನು ಬರೆಯಲು ಪ್ರಾರಂಭಿಸಿದ್ದು ಜೀವಾಳರ ಕೄತಿಯ ಬಗ್ಗೆ. . .
ಬರೆಯುತ್ತಿರುವುದು ನನ್ನ ಚಾರಣದ ಬಗ್ಗೆ. . .
ಇನ್ನು ಕೄತಿ ವಿಮರ್ಷೆಮಾಡಲು ನಾನೇನು ಅಷ್ಟು ದೊಡ್ಡವನಲ್ಲ ;)
ಇದು ನನ್ನ ಅನಿಸಿಕೆ. . .
ಚಿಕ್ಕವನಾಗಿದ್ದಾಗಿನಿಂದಲೂ ಪರಿಚಯವಿರುವ ಧನಂಜಯ ಜೀವಾಳರು ನಿಜಕ್ಕೂ ಪ್ರತಿಭಾವಂತರು. . .
ಅವರು ತಂದೆಯವರಿಗೆ ಕಳಿಸುವ ಶುಭಾಷಯ ಪತ್ರಗಳಂತೂ ನಿಜಕ್ಕೂ ಅದ್ಭುತ . . .
ಮೊನ್ನೆ ಊರಿಗೆ ಬಂದ ನಾನು ನಿನ್ನೆ ಸಂಜೆಯೇ ಆ ಪುಸ್ತಕವನ್ನು ಓದಿ ಮುಗಿಸಿದೆ. . .
ತೇಜಸ್ವಿಯವರೊಂದಿಗಿನ ಅನುಭವವನ್ನು ಬಹಳಾ ಚೆನ್ನಾಗಿ ಚಿತ್ರಿಸಿದ್ದಾರೆ. . .
ತೇಜಸ್ವಿಯವರ ಬಗ್ಗೆ ನಮಗೆ ಇನ್ನಷ್ಟು ತಿಳಿಸಿ ಕೊಟ್ಟ ಜೀವಾಳರೆ ನಿಮಗೆ ದನ್ಯವಾದಗಳು. . .
ನಿಮ್ಮ ಸಾಹಿತ್ಯ ಲೋಕದ ಹಾದಿ ಸುಗಮವಾಗಿರಲಿ. . !