ಸೋಮವಾರ, ಅಕ್ಟೋಬರ್ 31, 2011

ಎನ್ನುಸಿರು ಕನ್ನಡ



ಸಿರಿಗನ್ನಡಂ ಗೆಲ್ಗೆ  ಸಿರಿಗನ್ನಡಂ ಬಾಳ್ಗೆ. . .  
ಇಂದು ಕನ್ನಡ ರಾಜ್ಯೋತ್ಸವ . . .
ಕಂಗ್ಲೀಷನ್ನು  ಮಾತೃಬಾಷೆಯಾಗಿಸಿಕೊಂಡ  ವಿಶಾಲ ಹೃದಯಿಗಳ ಹಬ್ಬ  . . . .
ಕನ್ನಡಕ್ಕಿಂತ ಚೆನ್ನಾಗಿ ಇಂಗ್ಲಿಷ್ ಮಾತನಾಡುವ ವಿಶಾಲ ಹೃದಯದ ಕನ್ನಡಿಗರು ಕನ್ನಡ ಮಾತನಾಡುವವರನ್ನು ಕಂಡರೆ ಏಕೋ ಅಷ್ಟಕ್ಕಷ್ಟೇ . . .
ತಮಗೆ ಕೆಲಸ ನೀಡಿದ infi ನಾರಾಯಣ ಮೂರ್ತಿ ,ಮ್ಯಾಗಸ್ಸ್ಯೆ  ಪ್ರಶಸ್ತಿ ವಿಜೇತ ಹರೀಶ್ ಹಂದೆ ಮುಂತಾದವರೆಲ್ಲ ನಮ್ಮಂತೆ ಸಾಮಾನ್ಯ ಕನ್ನಡಿಗರು ಎಂಬುದನ್ನು ಮರೆತೆವೇನು ?
ಇದ್ದ ಕನ್ನಡದ ಒಂದೆರಡು ಶಾಲೆಗಳನ್ನು ಮುಚ್ಚಿ ಅದಕ್ಕೆ ವಿದ್ಯಾರ್ಥಿಗಳ ಕೊರತೆ ಕಾರಣ ಎಂದು ಸಬೂಬು ನೀಡುವ ನಾವು ಅಮೆರಿಕ ಕೇಳುವ ವಿದ್ಯಾವಂತ ಇಂಜಿನಿಯರ್ ಗಳು ಕಲಿತದ್ದು ಈ ಕನ್ನಡ ಮಾಧ್ಯಮ ಶಾಲೆ ಗಳಲ್ಲಿ ಎಂಬುದು ನಮಗೆ ತಿಳಿದಿಲ್ಲವೇನು?  
ನಮ್ಮ ಮುಖ್ಯಮಂತ್ರಿಗಳನ್ನೇ  ಜೈಲಿಗೆ ಅಟ್ಟಿ ನಮ್ಮ ರಾಜ್ಯ ಅತ್ಯಂತ ಭ್ರಷ್ಟ ರಾಜ್ಯ ಎಂದು ಡಂಗೂರ ಸಾರುವ ನಾವು ಕನ್ನಡಿಗರು . . 
ಅಪ್ಪ ಅಮ್ಮ ಚಿಕ್ಕಮ್ಮ ದೊಡ್ಡಮ್ಮ ಎಂಬ ಸಂಬಂಧ ಕಳೆದು ಕೊಂಡು ಮೊಮ್ ಡ್ಯಾಡ್ ಅಂಕಲ್ ಆಂಟಿಗಳ ಮೊರೆ ಹೋಗಿರುವ ನಾವು ಎಷ್ಟು ಭಾವನಾತ್ಮಕ ವಾಗಿ ಬೆಸೆದು ಕೊಳ್ಳಲು ಸಾದ್ಯ . . .
ಕುವೆಂಪು ,ಬೇಂದ್ರೆ,ಕಾರಂತರಂತಹ ಮಹಾನ್  ಬರಹಗಾರರ ಬಗ್ಗೆ ಗೊತ್ತಿರದ ಕನ್ನಡದ ಕೂಸುಗಳಿಗೆ  ಟೈಟಾನಿಕ್ ಕಥೆ  ಒಂದಕ್ಷರ ತಪ್ಪಿಲ್ಲದೆ ಹೇಳುವ ಕಲೆ ಒಗ್ಗಿದೆ !!!
ಬೆಂಗಳೂರಿನ ವಿಧಾನ ಸೌಧ ಗೊತ್ತಿಲ್ಲದಿದ್ದರೂ ವೈಟ್ ಹೌಸ್ ಬಗ್ಗೆ ವಿವರಿಸುವವನೆ ನಮ್ಮ ಕನ್ನಡಿಗ ಸತ್ಪ್ರಜೆ !!!!
ಇನ್ನು ಮುಂದೆ ಯಾವಾಗಲಾದರೂ ನಮ್ಮ ಕನ್ನಡಿಗರು ಸುಧಾರಿಸಿ ನಮ್ಮ ಕನ್ನಡ ವಿಶ್ವದ ಪರಿಚಿತ ಭಾಷೆಯಾಗಲಿ ಎಂದು ಆಶಿಸುತ್ತ ಸರ್ವರಿಗೂ ಕನ್ನಡ ರಾಜ್ಯೋತ್ಸವದ  ಹಾರ್ದಿಕ ಶುಭಾಶಯಗಳು . . . .   

ಭಾನುವಾರ, ಅಕ್ಟೋಬರ್ 30, 2011

ಹುಚ್ಚು ಮನಸ್ಸು

ಈ ಜೀವನವನ್ನೋದೇ ಹೀಗೆ . .  .
ಕಾಲ ಸಾಗುತ್ತಿರುತ್ತದೆ . . . .
ಆ ಕಾಲದ ಹಿಂದೆ ನಮ್ಮ ಮ್ಯಾರಥಾನ್ ಸಾಗುತ್ತಲೇ ಇರಬೇಕು. . .
ಸ್ವಲ್ಪ ಎಡವಿಬಿದ್ದು ಸುಧಾರಿಸಿಕೊಳ್ಳಲು ಕುಳಿತರೆ ನಮ್ಮನ್ನು ತುಳಿದುಕೊಂಡು ಮತ್ತೊಬ್ಬರು ಮುಂದುವರಿದಿರುತ್ತಾರೆ . . .
ಹೀಗೆ ಕಾಲದ ಹಿಂದೆ ಓಡುತ್ತ ಬಂದ ನಾನು ಹತ್ತು ವರುಷ ಮನೆಯಲ್ಲಿದ್ದು ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಹಾಸ್ಟೆಲ್ ಸೇರುವ ಅವಕಾಶ ಒದಗಿ ಬಂತು . . . 
ನನ್ನ sslc ಪರೀಕ್ಷೆ ಮುಗಿಸಿ ಪಿಯುಸಿ ಮಾಡಲು ಹಾಸ್ಟೆಲ್ಗೆ ಸೇರಿದ ನಾನು ಮರೆಯಲಾಗದ ಕ್ಷಣಗಳನ್ನು ನನ್ನ ನೆನಪಿನ ಪುಟಗಳಿಗೆ ಈ ಹಾಸ್ಟೆಲಿನಲ್ಲಿ ಸೇರಿಸಿ ಕೊಂಡೆ . . . 
ಸಾದಾರಣವಾಗಿ ಎಲ್ಲ ಹಾಸ್ಟೆಲ್ಗಳಲ್ಲಿ ಇರುವಂತೆ ನೀತಿ ನಿಯಮಾವಳಿಗಳು ಇಲ್ಲಿ ಇರುತ್ತಿದ್ದರೆ ಈ ಹಾಸ್ಟೆಲ್ ಜೀವನ ಬೇಸತ್ತು ಹೋಗುತ್ತಿತ್ತೇನೋ, ಆದರೆ  ಈ ವಾರ್ಡನ್ ಇಲ್ಲದ ಹಾಸ್ಟೆಲ್ ಹಾರಲು ಬಿಟ್ಟ ಪಂಜರದ ಹಕ್ಕಿಯಂತೆ ಅನಿಸತೊಡಗಿತು. . . 
ಪ್ರಥಮವಾಗಿ ಬರ್ಜರಿ ಎಂಟು ಜನರ ರೂಮು ಸಿಕ್ಕಿದಾಗ ಆ ರೂಮೊಂದು ಮೋಜಿನ ತಾಣದಂತಿತ್ತು, ಪ್ರಥಮ ಕಿರು ಪರೀಕ್ಷೆಯ ಅಂಕ ನೋಡಿ ಆ ಮೋಜಿನ ತಾಣವನ್ನು ೨ ಜನರ ರೂಮಿಗೆ ಅನಿವಾರ್ಯವಾಗಿ ಬದಲಿಸಬೇಕಾಗಿ ಬಂದಿತು. . .
ಇಲ್ಲಿಗೆ ಸಾದಾರಣವಾಗಿ ನನ್ನ ಒಂಟಿತನ ಪ್ರಾರಂಭವಾಯಿತು . . .
ಹೆಚ್ಚಾಗಿ ಒಬ್ಬನೇ ರೂಮಿನಲ್ಲಿ ಇರುತ್ತಿದ್ದ ನಾನು ಈ ಒಂಟಿತನಕ್ಕೆ ಒಗ್ಗಿಕೊಳ್ಳುತ್ತ ಹೋದೆ. . .
ಕಾಲ ಕ್ರಮೇಣ ಅದನ್ನು ಇಷ್ಟಪಟ್ಟೆ . . . 
ಹೆಚ್ಚಾಗಿ ಮಾತನಾಡಲು ಇಷ್ಟಪಡದ ನನ್ನ ಗೆಳೆತನ ಪುಸ್ತಕದೊಂದಿಗೆ ಬೆಳೆಯಿತು . . .
ಆದರು ಒಮ್ಮೊಮ್ಮೆ ಈ ಹುಚ್ಚು ಮನಸ್ಸಿನ ಮಾಯೆಯಿಂದ ಯಾವಾಗಲೋ ಒಮ್ಮೆ ಸುತ್ತಾಡಲು ಗೆಳೆಯರೊಂದಿಗೆ ಹೊರ ಹೋಗುತ್ತಿದ್ದೆ . . .
ಆ ಎರಡುವರ್ಷ ಹೇಗೆ ಸಾಗಿತೋ ಗೊತ್ತಿಲ್ಲ !. . . 
ಕೋನೇ ಪರೀಕ್ಷೆ ಬಂದೇಬಿಟ್ಟಿತು . . . ನಂತರ CET ಪರೀಕ್ಷೆಯ ಸಿದ್ದತೆ ಈ ಹುಚ್ಚು ಮನಸ್ಸಿನಿಂದಾಗಿ  ಅಷ್ಟಕ್ಕಷ್ಟೇ. .  .
ಬೋರ್ಡ್ ಪರೀಕ್ಷೆಯಲ್ಲಿ ಏನೋ ಒಳ್ಳೆ ಅಂಕಬಂದರೂ ಈ ಹುಚ್ಚು ಮನಸ್ಸಿನ ದೆಸೆಯಿಂದ CET ರಾಂಕ್ ಅಷ್ಟೇನೂ ಚೆನ್ನಾಗಿ ಬರಲಿಲ್ಲ . . .
ಈ ರಾಂಕಿನ ದೆಸೆಯಿಂದ ನನಗೆ ಬೇಕಾದ ಕಾಲೇಜೂ ಸಿಗಲಿಲ್ಲ . . . .!
 ಕೊನೆಗೂ ನನಗೆ ಸಿಕ್ಕ ಕಾಲೇಜನ್ನು ಪಾಲಿಗೆ ಬಂದದ್ದೆ ಪಂಚಾಮೃತವೆಂದೆಸಿಕೊಳ್ಳುತ್ತಾ ತೃಪ್ತಿ ಪಟ್ಟೆ. . .
ಮತ್ತೆ ಈ ಎರಡನೇ ಹಂತದ ಹಾಸ್ಟೆಲ್ ಜೀವನ . . .
ಇಲ್ಲಿ ಮತ್ತದೇ ಒಂಟಿತನ . . .
ಆದರೆ ಇಲ್ಲಿ ಆ ಒಂಟಿತನವನ್ನು ಪ್ರೀತಿಸಲು ಶುರುಮಾಡಿದೆ . . .
ಈ sms ಚಾಟಿಂಗ್ ಇಷ್ಟವಿಲ್ಲದಿದ್ದರೂ ಮತ್ತದೇ ಹುಚ್ಚುಮನಸ್ಸಿನ ಮಾಯೆ . . .
ಹೀಗೇ ಸಾದಾರಣವಾಗಿ ಎರಡು ವರ್ಷ ಕಳೆದು ಹೋಗಿದೆ . . .
ನೋಡೋಣ !ಈ ಹುಚ್ಚು ಮನಸ್ಸು ಇನ್ನೇನು ಮಾಡುತ್ತದೆಂದು !!!