ಶುಕ್ರವಾರ, ಡಿಸೆಂಬರ್ 23, 2011

ಹಳ್ಳಿ ಶಾಲೆ ಮತ್ತು ಮಂಜಯ್ಯ ಮಾಸ್ತರರು



ನಮಸ್ಕಾರ ಸ್ಸಾ. . . .ರ್
ಡೊಳ್ಳು ಹೊಟ್ಟೆ, ಬೊಕ್ಕುತಲೆಯ ದಢೂತಿ ದೇಹದ ವ್ಯಕ್ತಿ ಬಂದಾಗ ಎಲ್ಲಾ ಮಕ್ಕಳು ಒಂದು ಬಾರಿ ನಿಶ್ಯಬ್ದರಾಗಿ ಹೇಳಿದ ಮಾತು!!!
ಆ ವ್ಯಕ್ತಿ ಬೇರಾರು ಅಲ್ಲ . . ಅವರೇ ನಮ್ಮ ಮಂಜಯ್ಯ ಮಾಸ್ತರರು. . .!! 

ಮರವಂತಿಗೆ ಕುದುರೆಮುಖ ಅಭಯಾರಣ್ಯದ ನಡುವೆ ಇರುವ ಕುಗ್ರಾಮ. . 
ನಡುವೆ ಕುದುರೆಮುಖದ ಪರ್ವತಗಳಿಲ್ಲದಿದ್ದರೆ ಈ ಗ್ರಾಮದಿಂದ ಕಳಸಕ್ಕೆ ಕೇವಲ ಎಂಟುಮೈಲಿ,ಆದರೆ ಈ ಪರ್ವತದಿಂದಾಗಿ ಬಸ್ಸು ಸುತ್ತು ಬಳಸಿ ಚಾರ್ಮಾಡಿ ಘಾಟಿಯಾಗಿ ಅರವತ್ತು ಮೈಲಿ ಕ್ರಮಿಸ ಬೇಕಾದ ಪರಿಸ್ಥಿತಿ. . 
ಹಿಂದೆ ಗ್ರಾಮಸ್ಥರು ಮಣ್ಣಿನ ರಸ್ತೆಯನ್ನು ಮರವಂತಿಗೆಯಿಂದ ಕಳಸಕ್ಕೆ ಹೋಗಲು ಬಳಸುತ್ತಿದ್ದರೂ ಈಗ ನಕ್ಸಲರ ಹಾವಳಿಯಿಂದ ಈ ರಸ್ತೆಯನ್ನು ಸಂಪೂರ್ಣ ಮುಚ್ಚಲಾಗಿದೆ. . .
ಕಳ್ಳಸಾಗಾಣಿಕೆಗೂ ಈ ರಸ್ತೆ ಹೆಸರುವಾಸಿ . . .!
ಕುದುರೆಮುಖ ಅಭಯಾರಣ್ಯದ ನಡುವೆ ಇರುವ ಒಂದು ಹಿಂದುಳಿದ ಸ್ಥಳವೆಂದರೆ ಸಂಸೆ. . . 
ಇಲ್ಲಿರುವುದು ಪ್ರಾಪಂಚಿಕ ಜ್ಞಾನದಿಂದ ಹೊರಗುಳಿದ ಬುಡಕಟ್ಟು ಜನಾಂಗ. . 
ಇವರು ಏನೇ ಕೆಲಸವಿದ್ದರೂ ಬರಬೇಕಾದದ್ದು ಎಂಟು ಮೈಲಿ ಕಾಲ್ನಡಿಗೆಯಲ್ಲಿ ಕಳಸ ಇಲ್ಲವೇ ಮರವಂತಿಗೆಗೆ. . 
ಇನ್ನು ಮಕ್ಕಳು ಹೆಚ್ಚಿನವರು ಶಾಲೆಯ ಮುಖ ನೋಡದಿದ್ದರೂ ಸರ್ಕಾರದ ಒತ್ತಾಯಕ್ಕೆ ಒಂದಿಬ್ಬರು ಮಣಿದು ಶಾಲೆಯ ಮತ್ತು ಶಿಕ್ಷಕರ ಯೋಗಕ್ಷೇಮವನ್ನು ವಿಚಾರಿಸಲು ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಬರುತ್ತಿದ್ದರು!!
ಪಾಪ ಅವರಾದರೂ ಏನು ಮಾಡ್ಯಾರು ಎಂಟು ಮೈಲು ನಡೆಯ ಬೇಡವೇ???
ಇನ್ನೂ ಕೆಲವರ ಮನೆಯವರು  "ವಾ ಮಗೆ ಬರ್ಪೆ ತೂಕ"(ಯಾರು ಬರುತ್ತಾರೆ ನೋಡುವ) ಎಂದು ಜಗಳಕ್ಕೆ ಸನ್ನದ್ಧರಾಗಿದ್ದರು. . 
ಅವರ ಮಕ್ಕಳು ಶಾಲೆಗೆ ಹೋದರೆ,ಸೌದೆ ತರುವುದು,ಅವ್ರಿಗೆ ಕುಡಿಯಲು ತಂದು ಕೊಡುವುದ್ಯಾರು!!
ಇಲ್ಲಿಯೂ ಒಂದು ಸ್ವಾರ್ಥ್ಯ!!!
ಇವರು ಬರುತ್ತಿದ್ದ ಶಾಲೆಯ ಹಳ್ಳಿಯ ಮೇಷ್ಟ್ರೇ ಮಂಜಯ್ಯ ಮಾಸ್ತರರು. . .
ದಢೂತಿ ದೇಹವನ್ನು ಹೊತ್ತುಕೊಂಡು ೫೦ ವರ್ಷದ ಈ ಬ್ರಹ್ಮಚಾರಿ ಯುವಕ ಬರುತ್ತಿದ್ದದ್ದು ಎಂಟುಮೈಲಿ ದೂರದ ಕಳಸದಿಂದ!!
ಅದೂ ಕಲ್ನಡಿಗೆಯಲ್ಲಿ!!! ಅದೂ ಅಪರೂಪದಲ್ಲಿ!!
ಅಮವಾಸ್ಯೆ ಹುಣ್ಣಿಮೆಗೊಮ್ಮೆ ಬರುತ್ತಿದ್ದ ಮಕ್ಕಳು ಮತ್ತು ಮಾಸ್ತರರು ಒಂದೇ ದಿನ ಬಂದರೆಂದರೆ ಅದು ಬಹುದೊಡ್ಡ ಕಾಕತಾಳೀಯ.  .
ಪಾಪ ಕೆಲ ಮಕ್ಕಳಿಗೆ ಅವರೇ ಮೇಸ್ಟ್ರೆಂದು ತಿಳಿದೇ ಇರಲಿಲ್ಲ. . 
ನೋಡಿದರಲ್ವೇ ತಿಳಿಯುವುದು!!
ಅತ್ತ ಕರಾವಳಿಯೂ ಅಲ್ಲದ ಇತ್ತ ಮಲೆನಾಡೂ ಅಲ್ಲದ ಈ ಮರವಂತಿಗೆ ಪ್ರದೇಶದಲ್ಲಿ ಮಳೆಗಾಲದಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು.  .
ಈ ಮಳೆಗಾಲದಲ್ಲಿ ತಿಂಗಳುಗಳ ಕಾಲ ರಜೆ. . .
ಇನ್ನು ಮಳೆ ಪ್ರಾರಂಭ ಕಾಲದಲ್ಲಿ ಮತ್ತೆ ಒಂದು ತಿಂಗಳ ರಜೆ ಕಾರಣ ಗದ್ದೆ ನಾಟಿ!!
ಈ ಗದ್ದೆ ನಾಟಿಯಲ್ಲಿ ಶಿಕ್ಷಕರು ಮತ್ತು ಮಕ್ಕಳೂ ಬ್ಯುಸಿಯಾಗಿರುತ್ತಿದ್ದರು, , ,
ಈ ಕಾಲದಲ್ಲಿ ಶಾಲೆಗೆ ತಾತ್ಕಾಲಿಕ ಬೀಗ!!
ಮಳೆ ಬಿಟ್ಟ ಮೇಲೆ ಕುಯ್ಲಿಗಾಗಿ ಮತ್ತೆ ಒಂದು ತಿಂಗಳ ಚಕ್ಕರ್!!
ಶಾಲೆ ಇರುತ್ತಿದ್ದದ್ದು ಹೆಚ್ಚೆಂದರೆ ಒಂದು ತಿಂಗಳು. . !!
ಇನ್ನು ಈ ಸರ್ಕಾರ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಿದರೆ ಅವರು ಹೋಗಬೇಕಾದದ್ದು ದೂರದ ಬೆಳ್ತಂಗಡಿ ನಗರಕ್ಕೆ. . .
ಮರವಂತಿಗೆಗೇ ಬರಲು ಪರದಾಡುವ ಮಕ್ಕಳು ಬೆಳ್ತಂಗಡಿಗೆ ಬಂದಾರೇ????
ಇಷ್ಟು ಕಷ್ಟ ಪಟ್ಟು ಓದುವ ಛಲ ಹೊಂದಿರುವ ಮಕ್ಕಳು ಏನಾಗಬಲ್ಲರು???
ಗದ್ದೆ ನಾಟಿಯನ್ನೇ??? ಅಥವ ದೇಶದ ಈ ಪರಿಸ್ಥಿತಿಯನ್ನು ಬದಲಾಯಿಸುವ  ವ್ಯಕ್ತಿಯೋ???!!!

ಸೋಮವಾರ, ಡಿಸೆಂಬರ್ 19, 2011

ಅಲೆತ


ಹಾಸ್ಟೆಲ್ನಲ್ಲಿ ರೂಮಿನಲ್ಲೇ ಕಾಲ ಕಳೆಯುವ ನಾನು ಮನೆಗೆ ಬಂದಾಕ್ಷಣ ನನ್ನ ಅಲೆತ ಪ್ರಾರಂಭವಾಗಿ ಬಿಡುತ್ತದೆ. . 
ಪಶ್ಚಿಮಘಟ್ಟದ ತಪ್ಪಲಲ್ಲಿರುವ ಮೂಡಿಗೆರೆಯಲ್ಲಿ ಅಲೆಯಲು ಸ್ಥಳಗಳ ಕೊರತೆಯೇನಿಲ್ಲ. . .
ಸುತ್ತಮುತ್ತ ಹಳ್ಳಿಗಳಿರುವ ಈ ಮೂಡಿಗೆರೆಯಲ್ಲಿ ಕಾಫಿತೋಟ. . ಕೆಳಗೂರಿನ ಚಹ ತೋಟ. . .
ಚಾರ್ಮಾಡಿ ಘಾಟಿ ಇತ್ಯಾದಿಗಳನ್ನು ಗೆಳೆಯ ರಾಘವೇಂದ್ರನೊಂದಿಗೆ ಸುತ್ತುವ ಮಜವೇ ಬೇರೆ. . .
ಈ ಮಲೆನಾಡಿನಲ್ಲಿ ಮಳೆಗಾಲದಲ್ಲಿ ರಚ್ಚೆ ಹಿಡಿದು ಸುರಿಯುವ ಮಳೆಯನ್ನು ನೋಡುವಾಗ ನಮ್ಮ ಕಾಯ್ಕಿಣಿಯವರ ಮಳೆಯಸಾಲುಗಳು ನೆನಪಾಗುತ್ತದೆ. . 
ಕುವೆಂಪುರವರ ಪ್ರಾಕೄತಿಕ ವರ್ಣನೆಗಳನ್ನು ಅನುಭವಿಸಬೇಕಾದರೆ ನೀವು ಮಲೆನಾಡಿಗೆ ಬರಬೇಕು ಸ್ವಾಮಿ!!
ಅದಕ್ಕೇ ಇರಬೇಕು ತೇಜಸ್ವಿಯವರು ಮೂಡಿಗೆರೆಯನ್ನು ಆರಿಸಿಕೊಂಡದ್ದು. . .
ಇನ್ನು ಚಳಿಗಾಲದ ಅನುಭವವನ್ನು ನೀವೇ ಬಂದು ಅನುಭವಿಸಬೇಕು. . .!
ಇನ್ನು ಈ ನನ್ನ ಅಲೆತದಲ್ಲಿ ನನ್ನ ಸೈಕಲ್‍ನ ಪಾತ್ರವನ್ನು ಹೇಳದೇ ಇದ್ದರೆ ಅದು ಪಾಪ ಮುನಿಸಿಕೊಂಡಿತೋ ಏನೋ!!
ಯಾವುದೇ ಗದ್ದೆ ಗುಡ್ಡಗಳನ್ನು ಏರುವಲ್ಲಿ ನಮ್ಮ ಜೊತೆಗೂಡುವ ಸೈಕಲ್‍ನ ಸ್ಥಾನವನ್ನು ಬೈಕ್ ನಿಭಾಯಿಸಲು ಸಮರ್ಥವಾಗಿದೆಯೇ??
ನಮ್ಮ ಅನುಭವದ ಕೆಲವು ತುಣುಕುಗಳನ್ನು ಕೆಳಗೆ ನೀಡಿದ್ದೇನೆ(ಕೆಲವನ್ನು ಮೊದಲೇ ಫೇಸ್ಬುಕ್ನಲ್ಲಿ ಹಾಕಿದ್ದೆ). . .ಹೇಗನ್ನಿಸಿತು ನಿಮಗೆ??ಹೇಳಲು ಮರೆಯದಿರಿ!!
ಪ್ರಕೄತಿಯನ್ನು ಸೆರೆ ಹಿಡಿಯುವ ಪ್ರಯತ್ನ : ಹರಿಪ್ರಸಾದ್ :) 
ಕೆಳಗೂರು ಎಸ್ಟೇಟ್

ದುರ್ಗದ ಹಳ್ಳಿ

ದುರ್ಗದ ಹಳ್ಳಿ


ದುರ್ಗದ ಹಳ್ಳಿ


ದುರ್ಗದ ಹಳ್ಳಿ


ದುರ್ಗದ ಹಳ್ಳಿ


ಕೆಳಗೂರು ಎಸ್ಟೇಟ್


ಕೆಳಗೂರು ಎಸ್ಟೇಟ್


ದುರ್ಗದ ಹಳ್ಳಿ
ದುರ್ಗದ ಹಳ್ಳಿ


ಬೀಜುವಳ್ಳಿ

ಬೀಜುವಳ್ಳಿ

ಬೀಜುವಳ್ಳಿ

ಬೀಜುವಳ್ಳಿ

ಕುದ್ರೆಗುಂಡಿ


ಮುತ್ತಿಗೆಪುರ

ಹಳೇಮೂಡಿಗೆರೆ
ಮುತ್ತಿಗೆಪುರ





ಈಗ ಹೇಳಿ . . .ಮಲೆನಾಡಿಗೆ ಬರಲೇ ಬೇಕೆಂದೆನಿಸುತ್ತಿಲ್ಲವೇ????

ಶನಿವಾರ, ಡಿಸೆಂಬರ್ 17, 2011

'ಕಾಡಿನ ಸಂತ ತೇಜಸ್ವಿ'

ಚಿತ್ರ ಕೄಪೆ:ಅಂತರ್ಜಾಲ


ರಜೆಗೆ ಮನೆಗೆ ಬರುವಾಗ ನಾನು ಮೊದಲು ಹೋಗುವುದು ಅಪ್ಪನ ಆಫೀಸಿಗೆ. . .
ಅಲ್ಲಿ ಮೊದಲು ಕಣ್ಣಾಡಿಸುವುದು ಅವರ ಪುಸ್ತಕದ ಕಬೋರ್ಡಿಗೆ. .
ಸಾಮಾನ್ಯವಾಗಿ ಉಪನ್ಯಾಸ ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ತಂದೆಯವರಿಗೆ ಅನೇಕ ಅಮೂಲ್ಯ ಪುಸ್ತಕಗಳು ಉಡುಗೋರೆಯಾಗಿ ಸಿಕ್ಕಿರುತ್ತದೆ . . .
ಈ ಬಾರಿ ಎಂದಿನಂತೆ ಬಂದು ಕಣ್ಣಾಡಿಸಿದಾಗ ಸಿಕ್ಕ ಪುಸ್ತಕ ಜೀವಾಳರ 'ಕಾಡಿನ ಸಂತ ತೇಜಸ್ವಿ'. . .
ಈ ತೇಜಸ್ವಿ ಎಂಬ ಪದವನ್ನು ನೋಡಿದ ಮೇಲೆ ತಡೆಯಲಾರದ ಕುತೂಹಲ ನನ್ನಲ್ಲಿ ಆವರಿಸಿಬಿಟ್ಟಿತು. . .
ತೇಜಸ್ವಿ ಅವರ ಕೄತಿಗಳೇ ಹಾಗೆ ನೀವು ಒಂದು ಪುಟ ಓದಿದರೆ ಸಾಕು ಕೊನೆಯ ಪುಟದವರಗೆ ಓದುವತನಕ ಪುಸ್ತಕ ಬಿಟ್ಟು ಏಳಲು ಮನಸ್ಸು ಬರುವುದಿಲ್ಲ . .
ತೇಜಸ್ವಿಯವರು ಬರೆದ ಕೄತಿಗಳಂತೂ ವೈಜ್ಞಾನಿಕ . . .
ಇನ್ನು ಅವರ ಜೀವನ ಶೈಲಿ ,ಅವರ ಸಂಭಾಷಣೆಗಳನ್ನು ಓದುವುದು ಇನ್ನೂ ಚಂದ. . .
ಅವರ ಜೀವನ ಶೈಲಿಯೇ ಅಂತದ್ದು ನೋಡಿ. . .
ಅವರೊಂದಿಗೆ ನೀವು ಒಮ್ಮೆ ಮಾತಾಡಿದ್ದರೆ ಸಾಕು ಅದನ್ನು ನೀವು ಜೀವಮಾನವಿಡೀ ಮರೆಯುವ ಹಾಗಿಲ್ಲ. . .
ಯಾವುದಾದರೂ ಮಹಾನ್ ವ್ಯಕ್ತಿಗಳೊಡನೆ ಸಮಯ ಕಳೆಯುವ ಅವಕಾಶ ನಮಗೆ ಒದಗಿ ಬಂದರೆ ಅದು ನಮ್ಮ ಭಾಗ್ಯ .  .
ಅಂತಹಾ ಭಾಗ್ಯ ನನಗೊಂದು ಬಾರಿ ಒದಗಿಬಂತು. . .
ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಹೋದ ಎರಡು ಚಾರಣ ಮರೆಯಲಸಾದ್ಯ . .  .
ಕಾರಣ ನಾನು ಚಾರಣ ಹೋದದ್ದು ನನ್ನ ನೆಚ್ಚಿನ ಲೇಖಕ ತೇಜಸ್ವಿಯೊಂದಿಗೆ.  .
ಜೀವಾಳರ ನೇಚರ್ ಕ್ಲಬ್ ಆಯೋಜಿಸಿದ್ದ ಚಾರಣಕ್ಕೆ ತಂದೆಯೊಂದಿಗೆ ನಾನು ಹೋಗಿದ್ದೆ. . .
ಎತ್ತಿನ ಭುಜ ಮತ್ತು ಗವಿ ಗುಡ್ಡ ಕಾಡಿಗೆ ಹೋಗಿದ್ದ ಚಾರಣ ನಿಜಕ್ಕೂ ಅವಿಸ್ಮರಣೀಯ , , , ಕಾರಣ ತೇಜಸ್ವಿ. . .!
ಆ ವ್ಯಕ್ತಿ ಸರಳ ಸಜ್ಜನ ವ್ಯಕ್ತಿ . . .
ಕಾಡಿನಲ್ಲಿ ಸಂಚರಿಸುತ್ತ ಬೇಸತ್ತಿದ್ದ ನಮಗೆ ತೇಜಸ್ವಿಯವರ ಸಮಯೋಚಿತ ಹಾಸ್ಯ ನಮ್ಮ ಆಯಾಸವನ್ನು ಮರೆಯಿಸುತ್ತಿತ್ತು.  . . .
ಅವರ ಸಂಭಾಷಣೆ ಹೇಗೆ ನನ್ನಲ್ಲಿ ಅಚ್ಚಳಿಯದೆ ಉಳಿದಿದೆ ಎಂದರೆ ನಾವು ಎತ್ತಿನ ಭುಜ ಚಾರಣದಿಂದ ಹಿಂದೆ ಬರುವಾಗ ಅವರು ಮರದ ಬುಡ್ಡೆಯಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾಗ ಯಾರೊ ಫೊಟೋ ಕ್ಲಿಕ್ಕಿಸಲು ಹೋದಾಗ ತೇಜಸ್ವಿ" ಈ ಫೊಟೋನ ನೋಡಿ ಯಾವನೋ ಮುದುಕ ಸತ್ತ್ ಬಿದ್ದಿದಾನೆ ಅಂತ ತಿಳ್ಕಳ್ಬೋದು ಮಾರಾಯಾ" ಎಂದಿದ್ದರು. . .
ಹೇಗೆ ಅವರ ಮಾತಿನಲ್ಲಿ ಹಾಸ್ಯ ತುಂಬಿತ್ತೋ ಹಾಗೇ ಮುಂಗೋಪಿ ಕೂಡಾ. . .
ಏನಾದರೊಂದು ಎಡವಟ್ಟು ಮಾಡಿಸಿಕೊಂಡು ಬೈಯಿಸಿಕೊಂಡವರ ಸಂಖ್ಯೆಯೇ ಹೆಚ್ಚು. . . !
ಇದೆಲ್ಲಾ ನೆನಪಾದದ್ದು ಮೊನ್ನೆ ನಾನು ಹಳೇಕೋಟೆ ರಮೇಶ್ ಅವರ ಒಂದು ಪುಸ್ತಕದಲ್ಲಿ ಇದ್ದ ಚಾರಣಕ್ಕೆ ಹೋದ ತಂಡದ ಗುಂಪು ಛಾಯಾಚಿತ್ರವನ್ನು ನೋಡಿದಾಗ. . .
ಅದರಲ್ಲಿದ್ದ ನನ್ನನ್ನು ನೋಡಿ ಅದು ನಾನೆ? ಎಂಬ ಅನುಮಾನ. . .ಅದರೊಂದಿಗೆ ಈ ಸವಿನೆನಪು :)
ಛೇ!! ನಾನು ಎಲ್ಲಿಂದ ಎಲ್ಲಿಗೆ ಹೋಗಿಬಿಟ್ಟೆ ನೋಡಿ . . .
ನಾನು ಬರೆಯಲು ಪ್ರಾರಂಭಿಸಿದ್ದು ಜೀವಾಳರ ಕೄತಿಯ ಬಗ್ಗೆ. . .
ಬರೆಯುತ್ತಿರುವುದು ನನ್ನ ಚಾರಣದ ಬಗ್ಗೆ. . .
ಇನ್ನು ಕೄತಿ ವಿಮರ್ಷೆಮಾಡಲು ನಾನೇನು ಅಷ್ಟು ದೊಡ್ಡವನಲ್ಲ ;)
ಇದು ನನ್ನ ಅನಿಸಿಕೆ. . .
ಚಿಕ್ಕವನಾಗಿದ್ದಾಗಿನಿಂದಲೂ ಪರಿಚಯವಿರುವ ಧನಂಜಯ ಜೀವಾಳರು ನಿಜಕ್ಕೂ ಪ್ರತಿಭಾವಂತರು. . .
ಅವರು ತಂದೆಯವರಿಗೆ ಕಳಿಸುವ ಶುಭಾಷಯ ಪತ್ರಗಳಂತೂ ನಿಜಕ್ಕೂ ಅದ್ಭುತ . . .
ಮೊನ್ನೆ ಊರಿಗೆ ಬಂದ ನಾನು ನಿನ್ನೆ ಸಂಜೆಯೇ ಆ ಪುಸ್ತಕವನ್ನು ಓದಿ ಮುಗಿಸಿದೆ. . .
ತೇಜಸ್ವಿಯವರೊಂದಿಗಿನ ಅನುಭವವನ್ನು ಬಹಳಾ ಚೆನ್ನಾಗಿ ಚಿತ್ರಿಸಿದ್ದಾರೆ. . .
ತೇಜಸ್ವಿಯವರ ಬಗ್ಗೆ ನಮಗೆ ಇನ್ನಷ್ಟು ತಿಳಿಸಿ ಕೊಟ್ಟ ಜೀವಾಳರೆ ನಿಮಗೆ ದನ್ಯವಾದಗಳು. . .
ನಿಮ್ಮ ಸಾಹಿತ್ಯ ಲೋಕದ ಹಾದಿ ಸುಗಮವಾಗಿರಲಿ. . !